ಸಂಕ್ರಾಂತಿಯಂದು `ಆರ್ಯನ್` ಚಿತ್ರದ ಹಾಡುಗಳ ಧ್ವನಿಮುದ್ರಣ
Posted date: 09 Wed, Jan 2013 ? 01:44:16 PM

ಡಿ.ಕೇಶವ್ ಫ಼ಿಲಂಸ್ ಲಾಂಛನದಲ್ಲಿ ಡಿ.ಕಮರ್ ಅವರು ನಿರ್ಮಿಸುತ್ತಿರುವ ನೂತನ ಚಿತ್ರ ‘ಅರ್ಯನ್. ಈ ಚಿತ್ರದ ಹಾಡುಗಳ ಧ್ವನಿಮುದ್ರಣ ಸಂಕ್ರಾಂತಿಯ ಶುಭದಿನದಂದು ಪ್ರಸಾದ್ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ನಡೆಯಲಿದೆ. ಚಿತ್ರದ ಚಿತ್ರೀಕರಣ ಫ಼ೆಬ್ರವರಿ ಹದಿನಾಲ್ಕರಂದು ಆರಂಭವಾಗಲಿದೆ.
    ಖ್ಯಾತ ನಿರ್ದೆಶಕ ಡಿ.ರಾಜೇಂದ್ರಬಾಬು ನಿರ್ದೇಶಿಸುತ್ತಿರುವ ಈ ಚಿತ್ರದ ನಾಯಕರಾಗಿ ಹ್ಯಾಟ್ರಿಕ್‌ಹೀರೋ ಶಿವರಾಜಕುಮಾರ್ ಅಭಿನಯಿಸುತ್ತಿದ್ದಾರೆ.
    ಸೆಂಚುರಿ ಸ್ಟಾರ್ ಶಿವರಾಜಕುಮಾರ್ ಅವರು ನಾಯಕರಾಗಿ ನಟಿಸಿದ್ದ ‘ಜೋಡಿಹಕ್ಕಿ, ‘ಪ್ರೀತ್ಸೇ, ‘ಕುರುಬನರಾಣಿ, ‘ದೇವರಮಗ ಮುಂತಾದ ಚಿತ್ರಗಳನ್ನು ಡಿ.ರಾಜೇಂದ್ರಬಾಬು ಅವರು ನಿರ್ದೇಶಿಸಿದ್ದರು.
    ಚಂದ್ರಶೇಖರ್ ಛಾಯಾಗ್ರಾಹಕರಾಗಿರುವ ಈ ಚಿತ್ರಕ್ಕೆ ಜನಾರ್ದನ್ ಮಹರ್ಷಿ ಸಂಭಾಷಣೆ ಬರೆದಿದ್ದಾರೆ. ಜೆಸ್ಸಿಗಿಫ಼್ಟ್ ಸಂಗೀತ ನಿರ್ದೇಶನದ ‘ಅರ್ಯನ್ ಚಿತ್ರದ ಹಾಡುಗಳನ್ನು ಜಯಂತಕಾಯ್ಕಿಣಿ, ಕವಿರಾಜ್, ಯೋಗರಾಜಭಟ್, ನಾಗೇಂದ್ರಪ್ರಸಾದ್ ಬರೆದಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed